Wednesday 3 September 2014

 ಓಣಂ ಪರೀಕ್ಷೆಯಲ್ಲಿ ನಿರತರಾಗಿರುವ ನಮ್ಮ ಮಕ್ಕಳು. . .

 

'ಶಾಲಾ ಜೀವನದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು - ಸ್ಟ್ಯಾನಿ ಬೇಳ'


ಬದಿಯಡ್ಕ: ಪ್ರಾಥಮಿಕ ಶಾಲಾ ಜೀವನದಲ್ಲಿ ಸಾಹಿತ್ಯ ಪ್ರತಿಭೆಗೆ ಶಿಕ್ಷಕ ವೃಂದ ನೀಡಿದ ಪ್ರೋತ್ಸಾಹ ಹಾಗೂ ಬೆಂಬಲ ಇಂದು ನನ್ನನ್ನು ಪ್ರಶಸ್ತಿಯತ್ತ ಕೊಂಡೊಯ್ದಿದೆ ಎಂದರು 'ಯುವ ಕಿಟಾಳ್' ಪ್ರಶಸ್ತಿ ವಿಜೇತ ಸ್ಟ್ಯಾನಿ ಡಿ'ಸೋಜಾ ಬೇಳ. ಸಂತ ಬಾರ್ತಲೋಮೆಯ ಶಾಲೆಯ ಪರವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಹಳೆವಿದ್ಯಾರ್ಥಿ ತಮ್ಮ ಅನುಭವವನ್ನು ಈ ರೀತಿಯಾಗಿ ಹಂಚಿಕೊಂಡರು. ಲಿಯೋ ಪತ್ರಿಕಾ ಪ್ರಕಟಣಾ ಸಮೂಹ ಅಂತರಾಷ್ಟ್ರೀಯ ಮಟ್ಟದಲ್ಲಿ ಯುವ ಲೇಖಕರನ್ನು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಅವರು ಇತ್ತೀಚೆಗೆ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಸಂಚಾಕಲಕಿ ಸಿಸ್ಟರ್ ಸ್ಟೇಫನಿ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಶ್ವಿನಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲಕ್ಶ್ಮೀ, ಹಿರಿಯ ಶಿಕ್ಷಕಿ ಅನಸೂಯಾ ವೇದಿಕೆಯಲ್ಲಿದ್ದರು.





No comments:

Post a Comment